
ಇಂದು ದಿನಾಂಕ 24-08-2025, ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ಗಳನ್ನು ಠಾಣೆಗೆ ಕರೆಯಿಸಿ ಪರೇಡ್ ಮಾಡಿಸಲಾಯಿತು. ಈ ಕಾರ್ಯಾಚರಣೆಯನ್ನು ನಗರ ಉಪವಿಭಾಗದ ಡಿವೈಎಸ್ಪಿ ಶ್ರೀ ಬಸವರಾಜ ಎಲಿಗಾರ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರದೀಪ್ ತಳಕೇರಿ (ಪಿಐ), ಸುಷ್ಮಾ ನಂದಿಗೋಣ (ಪಿ.ಎಸ್.ಐ – ಕಾ&ಸು), ರಾಜು ಮಮದಾಪೂರ (ಪಿ.ಎಸ್.ಐ – ಅಪರಾಧ ವಿಭಾಗ) ಹಾಗೂ ಠಾಣೆಯ ಸಿಬ್ಬಂದಿ ಹಾಜರಿದ್ದರು.
ಪೊಲೀಸರು ರೌಡಿಶೀಟರ್ಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಮುಂಬರುವ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯ, ಸಂಘಟಿತ ಅಪರಾಧ ಅಥವಾ ಅಕ್ರಮ ಕೂಟಗಳಲ್ಲಿ ಭಾಗಿಯಾಗದಂತೆ ಸೂಚನೆ ನೀಡಿದರು.
ಪೊಲೀಸರು ಮತ್ತಷ್ಟು ಕಾನೂನು ಕ್ರಮಗಳನ್ನು ತಪ್ಪಿಸಲು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ದೃಢಸಂಕಲ್ಪಗೊಂಡಿದೆ.









